ಬದುಕು ಇದು ನಿನ್ನದಲ್ಲ

ಈ ಬದುಕಿಗೆ ನೀನೆಷ್ಟು ಪ್ರೀತಿಸುವಿಯಲ್ಲ
ಆದರೆ ಮರುಳೆ ಬದುಕು ಇದು ನಿನ್ನದಲ್ಲ
ಆತ್ಮ ಸಾಕ್ಷಾತ್ಕಾರಕ್ಕೆ ಇದೊಂದು ಸದಾವಕಾಶ
ಇದು ವ್ಯರ್ಥ ಮಾಡಿದರೆ ಏನೂ ಅರ್ಥವಿಲ್ಲ

ತುತ್ತು ಅನ್ನಕ್ಕೆ ನಿತ್ಯ ಕಾದಾಡುವೆ
ನಿನ್ನ ನಿಜ ರೂಪ ನೀನು ಮರೆತೆ
ಬಿದ್ದು ಹೋಗುವ ತನುವಿಗೆ ಮೆಚ್ಚಿ
ಕಾಮ ಕ್ರೋಧಗಳಲಿ ನೀನು ಬೆರತೆ

ವಾಮ ಮಾರ್ಗದಿ ಗಳಿಕೆ ಗಳಿಸಿ
ಹೊನ್ನು ಕಾಂಚನ ಕೂಡಿ ಹಾಕುವೆ
ಸತಿ ಸುತರ ಸಂತೈಸುವ ದಾರಿಯಲಿ
ನಿಜ ಸುಖವ ಮರೆತು ಅವರ ಸಾಕಿದೆ

ಕಾಲದ ಅರ್ಭಟದಲಿ ನೀನು ನಿಲ್ಲಲಾರೆ
ಕೊಚ್ಚಿ ಹೋಗುವ ನೀನು ಕಾಣದ ಹಾಗೆ
ಅಂತಲೇ ಬದುಕು ಸಾರ್ಥಕ ಗೊಳಿಸು
ಮಾಣಿಕ್ಯ ವಿಠಲನಾಗಿ ಭಜಿಸು ಹೀಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಜ ಮಾನವ ಜನ್ಮ ದುರ್ಲಭ
Next post ಗೋಂದನ ಬಾಳೆಗೊನೆ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys